Sunday, March 31, 2013

nANU!

ಹರಿ ಸ್ತಬ್ದನಾಗಿ ನಿಂತಳು  . ಮನಸ್ಸು ತೂಗಾಡಿತು . ಮಗು ,ಮಗಳ ಮಗು ಕಣ್ಣು ಬಿಟ್ಟ ದಿನದಿಂದ ಒಡನಾಡಿದ ಮಗು .

ಮನದ ಸಂದು ಗೋಂದಿನ ಮೂಲೆ ಗಳಲ್ಲಿ ತಾನೇ ತನಾದ ಮಗು . "ಹೋಗು "ಎಂದಿತು . ನನಗಾಗಿ ಮಗುವಲ್ಲಿ

ನಗುಬರಲಿಲ್ಲ . ಓಹೋ ಎಂದು ಮನಸ್ಸು ನೋವುತಿನ್ನತೊಡಗಿತು . ಭಾಗವತದ ಪುಟಗಲ್ಲನ್ನು ತಿರುವಿಹಾಕುತ್ತಾ

ಮನಸ್ಸನ್ನು ಮುದವಾಗಿಸಲು ಹರಿ ಪ್ರಯತ್ನ ನಡೆಸಿದಳು . ಕಣ್ಣು ಒಂದು ಕಡೆ ನಾಟಿತು . ಗೋಕರ್ಣ UPAKYANA .

ಗೋಕರ್ಣ ತಂದೆಗೆ ಉಪದೆಶಕೊಡುವ ಸಂದರ್ಬ . "ತಂದೆಯೇ ಈ ಮನೆ ಮಕ್ಕಳ ವ್ಯಾಮೋಹದ ಹೊರಗೆ ಬನ್ನಿ .

ನಿತ್ಯ ವಾಗಿರುವ ಹರಿಯನ್ನು ನೋಡಿ ,ಮನದಲ್ಲಿ ನಿಲ್ಲಿಸಿ , ಪೂಜಿಸಿ ಅಲ್ಲಿ ನಿಮಗೆ ಸಂತಾಪ ಇರುವುದಿಲ್ಲ . ವ್ಯಾಮೋಹದ

ಇನ್ನೊಂದು ಮುಕವೇ ದುಕ್ಕ . "

ಇದಲ್ಲವೇ ಪರಿಸರದಲ್ಲಿನ ಪರಮಾತ್ಮ ! ಭಕ್ತರ ಪಾಲಿನ ಬೆಳದಿಂಗಳು!

Monday, March 11, 2013

SOUGHT!

ಒಮ್ಮೆ ತಿಂಗಳ ಕೆಳಗೆ ತಿಮ್ಮಪ್ಪನ ನೆನೆಪು ಆಯಿತು ನೋಡಬೇಕು ಎಂದು ಆಸೆ ಬಂದಿತು .

ತಿಮ್ಮಪ್ಪನನ್ನು ನೋಡುವುದು ಸುಲಭವಲ್ಲ . ನಾನು ಅವನನ್ನೇ ಕೇಳಿದೆ ನನಗೆ ದರ್ಶನ ಕೊಡು ಎಂದು .

ಕೇಳಿದ್ದನ್ನು ಮರತೆ . ನನ್ನವರ ೬ ೯ ನೇ ಹುಟ್ಟುಹಬ್ಬ ಶುಕ್ರವಾರ ಬರುವುದನ್ನು ನೋಡಿ ತಿರುಪತಿಗೆ ಹೋಗಿ

ಬರುವಾ ಎಂದು ಯೋಚನೆ ಬಂತು . ಲಿಲ್ಲಿ ಪ್ರಭಾ ಬರಲು ಒಪ್ಪಿಕೊಂಡರು ಪ್ಲಾನ್ ಆಗಿಹೋಯಿತು .

ಪ್ರಭ ತಂಗಲು ಮತ್ತು ಊಟಕ್ಕೆ ಏರ್ಪಾಟು ಮಾಡಿದಳು . ೯ ರ ಬೆಳಿಗ್ಗೆ ಇನ್ನೋವ ದಲ್ಲಿ ನಾವು ೫ ಜನ ಹೊರಟೆವು .

ಕೋಲಾರದ ಬಳಿ ನರಸಿಂಹ ತೀರ್ಥ ಎಂಬ ರಾಯರ ಮತದಲ್ಲಿ ದ್ವಾದಸಿ ಪಾರಣೆ ಆಯಿತು .  ತಿರುಚಾನೂರಿನಲ್ಲಿ

ದಿವ್ಯ ದರುಶನ ಪ್ರಸಾದ ವಾಯಿತು . ಮಂಗಾಪುರದಲ್ಲಿ ಅದ್ಬುತ ಘಟನೆ ನಡೆಯಿತು . ದರುಶನ ಮಾಡಿ

ಹೊರಗೆ ಬಂದಾಗ ಪುರೋಹಿತರು ನಮ್ಮವರ ಬಳಿ ಬಂದು ಸಿಹಿ ಪೊಂಗಲನ್ನು ಕೊಟ್ಟುಹೋದರು . ನಮಗೆ

ಇದು ದೇವರೇ ಬಂದು ಕೊಟ್ಟ ಆಶಿರ್ವಾದ ಎನ್ನಿಸಿತು . ರಾತ್ರಿ ೧ ೦ ಗಂಟೆಗೆ ತಿಮ್ಮಪ್ಪನ ದರುಶನ ಸೊಗಸಾಗಿ ಆಯಿತು

ಹಣ ಶ್ರಮ ವ್ಯಯವಿಲ್ಲದೆ . ಆಗ ನೆನಪಾಯಿತು ನನ್ನ ಕೋರಿಕೆ . "ನನ್ನಪ್ಪ ನಿನ್ನ ನೆನಪಿನಲ್ಲಿ ನನ್ನನ್ನು ಸದಾ ಇಟ್ಟಿರು "

ಎಂದು ಪ್ರಾರ್ಥಿಸಿ ಸಿಹಿ ಅನುಭವದಲ್ಲಿ ಮುಳುಗಿದೆ .