ಒಮ್ಮೆ ತಿಂಗಳ ಕೆಳಗೆ ತಿಮ್ಮಪ್ಪನ ನೆನೆಪು ಆಯಿತು ನೋಡಬೇಕು ಎಂದು ಆಸೆ ಬಂದಿತು .
ತಿಮ್ಮಪ್ಪನನ್ನು ನೋಡುವುದು ಸುಲಭವಲ್ಲ . ನಾನು ಅವನನ್ನೇ ಕೇಳಿದೆ ನನಗೆ ದರ್ಶನ ಕೊಡು ಎಂದು .
ಕೇಳಿದ್ದನ್ನು ಮರತೆ . ನನ್ನವರ ೬ ೯ ನೇ ಹುಟ್ಟುಹಬ್ಬ ಶುಕ್ರವಾರ ಬರುವುದನ್ನು ನೋಡಿ ತಿರುಪತಿಗೆ ಹೋಗಿ
ಬರುವಾ ಎಂದು ಯೋಚನೆ ಬಂತು . ಲಿಲ್ಲಿ ಪ್ರಭಾ ಬರಲು ಒಪ್ಪಿಕೊಂಡರು ಪ್ಲಾನ್ ಆಗಿಹೋಯಿತು .
ಪ್ರಭ ತಂಗಲು ಮತ್ತು ಊಟಕ್ಕೆ ಏರ್ಪಾಟು ಮಾಡಿದಳು . ೯ ರ ಬೆಳಿಗ್ಗೆ ಇನ್ನೋವ ದಲ್ಲಿ ನಾವು ೫ ಜನ ಹೊರಟೆವು .
ಕೋಲಾರದ ಬಳಿ ನರಸಿಂಹ ತೀರ್ಥ ಎಂಬ ರಾಯರ ಮತದಲ್ಲಿ ದ್ವಾದಸಿ ಪಾರಣೆ ಆಯಿತು . ತಿರುಚಾನೂರಿನಲ್ಲಿ
ದಿವ್ಯ ದರುಶನ ಪ್ರಸಾದ ವಾಯಿತು . ಮಂಗಾಪುರದಲ್ಲಿ ಅದ್ಬುತ ಘಟನೆ ನಡೆಯಿತು . ದರುಶನ ಮಾಡಿ
ಹೊರಗೆ ಬಂದಾಗ ಪುರೋಹಿತರು ನಮ್ಮವರ ಬಳಿ ಬಂದು ಸಿಹಿ ಪೊಂಗಲನ್ನು ಕೊಟ್ಟುಹೋದರು . ನಮಗೆ
ಇದು ದೇವರೇ ಬಂದು ಕೊಟ್ಟ ಆಶಿರ್ವಾದ ಎನ್ನಿಸಿತು . ರಾತ್ರಿ ೧ ೦ ಗಂಟೆಗೆ ತಿಮ್ಮಪ್ಪನ ದರುಶನ ಸೊಗಸಾಗಿ ಆಯಿತು
ಹಣ ಶ್ರಮ ವ್ಯಯವಿಲ್ಲದೆ . ಆಗ ನೆನಪಾಯಿತು ನನ್ನ ಕೋರಿಕೆ . "ನನ್ನಪ್ಪ ನಿನ್ನ ನೆನಪಿನಲ್ಲಿ ನನ್ನನ್ನು ಸದಾ ಇಟ್ಟಿರು "
ಎಂದು ಪ್ರಾರ್ಥಿಸಿ ಸಿಹಿ ಅನುಭವದಲ್ಲಿ ಮುಳುಗಿದೆ .
ತಿಮ್ಮಪ್ಪನನ್ನು ನೋಡುವುದು ಸುಲಭವಲ್ಲ . ನಾನು ಅವನನ್ನೇ ಕೇಳಿದೆ ನನಗೆ ದರ್ಶನ ಕೊಡು ಎಂದು .
ಕೇಳಿದ್ದನ್ನು ಮರತೆ . ನನ್ನವರ ೬ ೯ ನೇ ಹುಟ್ಟುಹಬ್ಬ ಶುಕ್ರವಾರ ಬರುವುದನ್ನು ನೋಡಿ ತಿರುಪತಿಗೆ ಹೋಗಿ
ಬರುವಾ ಎಂದು ಯೋಚನೆ ಬಂತು . ಲಿಲ್ಲಿ ಪ್ರಭಾ ಬರಲು ಒಪ್ಪಿಕೊಂಡರು ಪ್ಲಾನ್ ಆಗಿಹೋಯಿತು .
ಪ್ರಭ ತಂಗಲು ಮತ್ತು ಊಟಕ್ಕೆ ಏರ್ಪಾಟು ಮಾಡಿದಳು . ೯ ರ ಬೆಳಿಗ್ಗೆ ಇನ್ನೋವ ದಲ್ಲಿ ನಾವು ೫ ಜನ ಹೊರಟೆವು .
ಕೋಲಾರದ ಬಳಿ ನರಸಿಂಹ ತೀರ್ಥ ಎಂಬ ರಾಯರ ಮತದಲ್ಲಿ ದ್ವಾದಸಿ ಪಾರಣೆ ಆಯಿತು . ತಿರುಚಾನೂರಿನಲ್ಲಿ
ದಿವ್ಯ ದರುಶನ ಪ್ರಸಾದ ವಾಯಿತು . ಮಂಗಾಪುರದಲ್ಲಿ ಅದ್ಬುತ ಘಟನೆ ನಡೆಯಿತು . ದರುಶನ ಮಾಡಿ
ಹೊರಗೆ ಬಂದಾಗ ಪುರೋಹಿತರು ನಮ್ಮವರ ಬಳಿ ಬಂದು ಸಿಹಿ ಪೊಂಗಲನ್ನು ಕೊಟ್ಟುಹೋದರು . ನಮಗೆ
ಇದು ದೇವರೇ ಬಂದು ಕೊಟ್ಟ ಆಶಿರ್ವಾದ ಎನ್ನಿಸಿತು . ರಾತ್ರಿ ೧ ೦ ಗಂಟೆಗೆ ತಿಮ್ಮಪ್ಪನ ದರುಶನ ಸೊಗಸಾಗಿ ಆಯಿತು
ಹಣ ಶ್ರಮ ವ್ಯಯವಿಲ್ಲದೆ . ಆಗ ನೆನಪಾಯಿತು ನನ್ನ ಕೋರಿಕೆ . "ನನ್ನಪ್ಪ ನಿನ್ನ ನೆನಪಿನಲ್ಲಿ ನನ್ನನ್ನು ಸದಾ ಇಟ್ಟಿರು "
ಎಂದು ಪ್ರಾರ್ಥಿಸಿ ಸಿಹಿ ಅನುಭವದಲ್ಲಿ ಮುಳುಗಿದೆ .
No comments:
Post a Comment